27 ಮೇ, 2012

ಎಂ.ಪಿ.ಪ್ರಕಾಶ ಬಗ್ಗೆ ಹರಪನಹಳ್ಳಿ ಶಿವಕುಮಾರ ಬಾಗಳಿ ಬರೆದ ಕವನ

ಮರೆಯಾಯಿತು ಹೂವಿನ ಹಡಗು
ಶುರುವಾಯಿತು ಜನತೆಯ ಕೊರಗು
ಕಣ್ಮರೆಯಾಯಿತು ಪ್ರಕಾಶನ ಮೆರುಗು
ನಮ್ಮಿಂದ  ಅಗಲಿತು ಈ ಹೂವಿನ ಹಡಗು

ಬಡವರ ಜೀವನಕ್ಕೆ ಬೆಳಕು
ರಾಜಕೀಯ ಬದುಕಿಗೆ ಹೊಳಪು
ರಂಗ ಕಲಾವಿದರಿಗೆ ಹುರುಪು
ನಮ್ಮೊಂದಿಗೆ ಇರುವುದು ಮಾಸದ ಪ್ರಕಾಶನ ನೆನಪು

ಜನ ಬಲದಲಿ ತೇಲಿದ ಈ ಹಡಗು
ಹಣ ಬಲದಲಿ ಮುಳುಗಿದ  ಈ ಹಡಗು
ಬಿರುಗಾಳಿಗೆ ಬಗ್ಗದೆ ಸಾಗಿದ  ಈ ಹಡಗು
ಇನ್ಮುಂದೆ ನಾವೂ ನೋಡುವುದು ಬರೀ ಗೊಡಗು

ಭ್ರಷ್ಟಾಚಾರದ ಸುಳಿಗೆ ಸಿಲುಕದ ಹಡಗು
ಶಿಷ್ಟಾಚಾರಕ್ಕೆ ಒಳಗಾದ ಹಡಗು
ಒಳಸಂಚಿನ ತಂತ್ರಗಳ ತುಳಿತಕ್ಕೆ ಬಲಿಯಾದ ಹಡಗು
ಕೊನೆಯವರೆಗೂ ಅಜಾತ ಶತೃವಾಯಿತು ಈ ಹೂವಿನ ಹಡಗು...


ಶಿವಕುಮಾರ.ಹಾ.ಬಾಗಳಿ
ಆಂಗ್ಲ ಉಪನ್ಯಾಸಕರು ಎಸ್
.ಎಸ್.ಹೆಚ್.ಜೈನ್ ಪಿ.ಯು.ಕಾಲೇಜ್   ಹರಪನಹಳ್ಳಿ