13 ಅಕ್ಟೋಬರ್, 2013

ತಾಳಿ ಕಟ್ಟುವುದನ್ನು ಬಿಟ್ಟುಬಿಡಿ ..ಇಲ್ಲ ಕಟ್ಟಿದ್ದರೆ ಕಿತ್ತೆಸೆದುಬಿಡಿ...

ಅಡ್ಡಪಲ್ಲಕ್ಕಿ ಮತ್ತು ಗಂಡನ ಪಾದಪೂಜೆ ಮೌಢ್ಯವೆಂದು ಭಾವಿಸುವವರು ತಾಳಿ ಕಟ್ಟುವುದನ್ನು ಬಿಟ್ಟುಬಿಡಿ ..ಇಲ್ಲ ಕಟ್ಟಿದ್ದರೆ ಕಿತ್ತೆಸೆದುಬಿಡಿ... ಸುಮ್ಮನೆ ಪ್ರಗತಿಪರರೆಂದು ಬಿಂಬಿಸುವ ಭರದಲ್ಲಿ ಕೆಲವು ಆಚರಣೆ ಹಾಗೂ ಪದ್ಧತಿಗಳನ್ನು ವಿರೋಧಿಸಿ ಮೂಲಕ ತಾವು ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿರುವ ಅಪಾಯಕಾರಿ ಬೆಳವಣಿಗೆ  ಕರ್ನಾಟಕದಲ್ಲಿ ಕೆಲವರು ಮಾಡುತ್ತಿದ್ದಾರೆ. ತಾವಾಗಿ ಇಷ್ಟಪಟ್ಟು ಆಚರಿಸುವ ಪದ್ಧತಿಯನ್ನು ವಿರೋಧ ಮಾಡುವುದಕ್ಕೆ ಇವರಿಗೆ ಯಾರು ಅಧಿಕಾರ ನೀಡಿದರು ಎನ್ನುವುದನ್ನು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಯಾರದೇ ಒತ್ತಡ, ಬಲವಂತವಿಲ್ಲದೆ ಆಚರಿಸುತ್ತಾರೆಂದರೆ ದೇಶದಲ್ಲಿ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗೆ ಆಚರಣೆ ಮಾಡದೆ ಇರುವ ಹಕ್ಕೂ ಇದೆ. ಬೇಡವಾದವರು ಅದರಿಂದ ದೂರವಿದ್ದರಾಯಿತು. ಅವರನ್ನು ಯಾರೂ ಬಲವಂತ ಮಾಡುವುದಿಲ್ಲ. ಆದರೆ ವಿರೋಧ ಮಾಡುವುದು, ನಿಲ್ಲಿಸುವುದು ಇದಕ್ಕೆ ಇವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ?

ಒಟ್ಟಾರೆ ಈಗ ನಡೆಯುತ್ತಿರುವ ಆಚರಣೆಗಳೆಲ್ಲಾ ಸರಿ ಇಲ್ಲಾ ಎನ್ನುವುದಾದರೆ, ಎಲ್ಲರೂ ಮನುಷ್ಯರೇ ಎಲ್ಲರೂ ಸಮಾನರು ಎಂದು ಭಾವಿಸುವುದಾದರೆ ಮೊದಲು ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಸೇರಿಸುವಾಗ ಧರ್ಮ ಮತ್ತು ಜಾತಿ ಕಾಲಂಗಳಲ್ಲಿ ಭಾರತೀಯ ಎಂದು ಬರೆಸಿ ಪ್ರಗತಿಪರರೇ …

ಮನೆಯಲ್ಲಿ ಹೆಂಡತಿ ಬಿಸಿ ನೀರು ಕಾಯಿಸಿಕೊಡುತ್ತಾಳೆ.. ನೀವು ತಿಂದ ಎಂಜಲು ತಟ್ಟೆಯನ್ನು ತೊಳೆಯುತ್ತಾಳೆ.. ನಿಮ್ಮ ಬಟ್ಟೆ ಒಗೆಯುತ್ತಾಳೆ ಅದು ಶೋಷಣೆಯಲ್ಲವೇ… ಮನೆಯ ಹೆಂಡತಿ ಮೇಲೆ ಶೋಷಣೆ ಮಾಡುವ ನೀವು ಇನ್ನೊಬ್ಬರು ಭಕ್ತಿಯಿಂದ ಹೆಗಲ ಮೇಲೆ ಪಲ್ಲಕ್ಕಿ ಹೊತ್ತರೆ ನಿಮ್ಮ ಹೆಗಲು ನೋವು ಬಂದ ತರಹ ವರ್ತಿಸುತ್ತೀರಲ್ಲಾ … ಮೊದಲು ನಿಮ್ಮ ಹೆಂಡತಿಯನ್ನು ಸಮಾನವಾಗಿ ಕಾಣಿ .. ಮುಸುರೆ ತಿಕ್ಕಿ … ನೀವು ಉಂಡ ತಟ್ಟೆ ನೀವು ತೊಳೆದು ಸಮಾಜಕ್ಕೆ ಭೊಧನೆ ಮಾಡಿ ಪ್ರಗತಿಪರರೇ …
ತಾಳಿ ಕಟ್ಟುವುದು ಮೌಢ್ಯವಲ್ಲವೇ …. ಧರ್ಮ,ಆಚಾರ, ವಿಚಾರ, ಪರಂಪರೆ ಬಗ್ಗೆ ನಂಬಿಕೆ ಇಲ್ಲವೆಂದರೆ ತಾಳಿ ಯಾಕೆ ಕಟ್ಟುತ್ತೀರಿ… ಕಟ್ಟಿದ ಪ್ರಗತಿಪರರು ತಾಳಿ ಕಿತ್ತೆಸೆದುಬಿಡಿ.. ..

ಬೇರೆ ಬೇರೆ ಧರ್ಮಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆಗಿಂತ ಹಿಂದೂ ವೀರಶೈವ ಧರ್ಮಗಳ ಬಗ್ಗೆ ಮಾತನಾಡುತ್ತೀರಲ್ಲ… ಬೇರೆ ಧರ್ಮಗಳ ಅಮಾನವೀಯ ಪದ್ಧತಿಗಳ ಬಗ್ಗೆ ಮಾತನಾಡುವ ಗಂಡಸುತನ ತೋರಿಸಿ ಪ್ರಗತಿಪರರೇ ….

ಈ ದೇಶದಲ್ಲಿ ಧರ್ಮ ದೇವರು ಪತಿ ಪತ್ನಿ ತಂದೆ ತಾಯಿ ಎಂಬ ಬಿಗಿ ಬಂಧವಿಲ್ಲದಿದ್ದರೆ ಹುಟ್ಟಿದ ಮಕ್ಕಳು ವಿದೇಶಿ ವ್ಯವಸ್ಥೆಯಂತೆ ಬೀದಿ ಪಾಲಾಗಿ ಹೋಗುತ್ತಿದ್ದವು.

ದಯವಿಟ್ಟು ನನ್ನ ಈ ಸಲಹೆಯ ಬಗ್ಗೆ ಏನನ್ನಿಸುತ್ತೆ..?


                                                ಪತ್ರೇಶ್ ಹಿರೇಮಠ

12 ಅಕ್ಟೋಬರ್, 2013

ಅನ್ನ ಮತ್ತು ಕ್ಷೀರ ಭಾಗ್ಯ ನೀಡಿದ ಕರ್ನಾಟಕ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ "ಮನಸ್ವಿನಿ" ಮತ್ತು "ಮೈತ್ರಿ" ಹಾಗೂ "ಡಯಾಲಿಸಿಸ್

ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಂತರವಾಗಿ ಕ್ರಿಯಾಶೀಲ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅಭಿವೃಧ್ಧಿ ಪರ ಶಕೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ಹಿಂದುಳಿದ, ದಲಿತರ, ಅಲ್ಪಸಂಖ್ಯಾತ, ಮತ್ತು ಸಾಮಾನ್ಯ ಬಡವರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ನಿಜವಾಗಿಯೂ ಅಸಹಾಯಕರ ಧ್ವನಿ ಎಂಬುದನ್ನು ಅಧಿಕಾರ ಬಳಕೆಯ ಮೂಲಕ ಸಾಬೀತು ಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ಕೂಡಲೇ ಒಂದು ರೂಗೆ ಕೆಜಿಗೆ ಅಕ್ಕಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಹಾಲು ನೀಡುವ ಮೂಲಕ ಬಡವರ ಹಸಿವಿನ ಬವಣೆ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಿದ್ದು ಶ್ಲಾಘನೀಯ ಸಂಗತಿ. ಅಕ್ಕಿ ಮತ್ತು ಹಾಲು ನೀಡಿದ್ದಕ್ಕೆ ಯಾರು ಏನೇ ಟೀಕೆ ಮಾಡಲಿ ನಿಜವಾದ ಬಡವರ ಪರ ಆಲೋಚನೆ ಮಾಡಿ ತಂದ ಯೋಜನೆಗಳು ಇವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇತ್ತೀಚೆಗೆ ತಾಲೂಕಿಗೊಂದು ಡಯಾಲಿಸಿಸ್  ಘಟಕಗಳನ್ನು ತೆರೆಯುವ ಮೂಲಕ ಆರೋಗ್ಯ ಭಾಗ್ಯ ನೀಡುವ ಮೂಲಕ ಬಡವರ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಕಾಂಗ್ರೆಸ್ ನಿಜ ಬಡವರ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜೊತೆಗೆ ಅವಿವಾಹಿತ ಮಹಿಳೆಯರ ಅಭದ್ರ ಬದುಕಿಗೆ ಆಸರೆಯಾಗಿ ಅವರ ತಿಂಗಳ ನೈಜ ಬದುಕಿನ ಖರ್ಚು ವೆಚ್ಚ ಹಾಗೂ ಜೀವನ ಭದ್ರತೆಗಾಗಿ 40 ವರ್ಷ ಮೀರಿದ ನಿರ್ಗತಿಕ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವುದು ಮತ್ತು ಪರಿತ್ಯಕ್ತ (ಗಂಡ ಬಿಟ್ಟಿರುವ)ಇದರಲ್ಲಿ 45ರಿಂದ 65ವರ್ಷ ವಯಸ್ಸಿನ 12,000-17,000 ಆದಾಯ ಹೊಂದಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಸನ ನೀಡಲಾಗುತ್ತದೆ ಪರಿತ್ಯಕ್ತ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವ ಯೋಜನೆ ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿ ಮುಖ್ಯಮಂತ್ರಿಯಾಗಿ  ಸಿದ್ದರಾಮಯ್ಯ ಗೋಚರಿಸುತ್ತಿದ್ದಾರೆ.
 ಇನ್ನು ಮೈತ್ರಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 500 ಪಿಂಚಣಿ ನೀಡಲಾಗುತ್ತದೆ. ಇವರು ಮತದಾರರ ಗುರುತಿನ ಚೀಟಿ, ಲೈಂಗಿತ ಅಲ್ಪಸಂಖ್ಯಾತರು ಎನ್ನುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆಯಿಂದ ದೃಢೀಕರಣ ಪತ್ರ. ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಯಲ್ಲಿ ನೋಂದಣೆಯಾಗಿರುವವರಿಗೆ ಈ ಸೌಲಭ್ಯ ನೀಡಿದ ಮೊದಲ ಸರ್ಕಾರ ಕರ್ನಾಟಕ ಸರ್ಕಾರ ಮೊದಲನೆಯದಾಗಲಿದೆ.
ಇಷ್ಟೆಲ್ಲಾ ಬಡವರ ಪರ ಯೋಜನೆ ಜಾರಿಗೆ ತರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಕೆಲವರ ಅಸ್ಥಿಮಿತ ಟೀಕೆಗಳು ನಿಷ್ಪ್ರಯೋಜಕ.
ಅಧಿಕಾರಿಗಳ ಮೇಲಿನ ಬಿಗಿ ಹಿಡಿತ ಮತ್ತು ಲಂಚರಹಿತ ಆಡಳಿತ ಸಿದ್ದರಾಮಯ್ಯನವರ ಕನಸು ಈಡೇರುವ ದಿನ ದೂರವಿಲ್ಲ....
                                                                                              ಪತ್ರೇಶ್ ಹಿರೇಮಠ್