25 ಏಪ್ರಿಲ್, 2020

ಡಿಕೆಶಿಗೆ ಕೆಪಿಸಿಸಿ ಸಾರಥ್ಯ.. ಚುರುಕಾಯಿತು ಕಾಂಗ್ರೆಸ್ ಪಡೆ ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಜನರ ನಡುವೆ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ..!

ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗಾಗಿ ಗುಜರಾತ್ ಶಾಸಕರ ರಕ್ಷಣೆ ಹೊಣೆಹೊತ್ತು ಯಶಸ್ವಿಯಾಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಇಡಿ, ಐಟಿ, ಸಿಬಿಐ ದಾಳಿಗೆ ಗುರಿಯಾಗಿದ್ದ ಡಿಕೆ ಶಿವಕುಮಾರ್ ಈಗ ಕರ್ನಾಟಕ ಕಾಂಗ್ರೆಸ್‍ನ ನೂತನ ಸಾರಥಿ. ಪಕ್ಷದ ಆದೇಶ ಖಡಕ್ಕಾಗಿ ಪಾಲಿಸುವ ಹಾಗೂ ರಾಜ್ಯದ ಯಾವುದೇ ಮೂಲೆಯ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವ ನಾಯPತ್ವ ಗುಣವುಳ್ಳ ಡಿಕೆಶಿ ಹೋರಾಟಕ್ಕೂ ಸೈ ಎಂತಹ ಅಪಾಯ ಎದುರಿಸಲೂ ಸಜ್ಜಾಗುವ ವರ್ಚಸ್ವೀ ನಾಯಕ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಆದೇಶ ಪಾಲಿಸುತ್ತಾ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಾಗಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡುವಷ್ಟು ಎತ್ತರಕ್ಕೆ ಬೆಳೆದ ಡಿಕೆಶಿ ಸರ್ವ ಜಾತಿ ಧರ್ಮಗಳ ಜನತೆ ಒಪ್ಪುವ ನಾಯಕವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ,ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ಜೊತೆಗೆ ಸಚಿವಗಿರಿ ಅನುಭವಿಸಿ ರಾಜ್ಯದೆಲ್ಲೆಡೆ ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಡಿP Éಶಿವಕುಮಾರ್ ಪ್ರತಿ ಜಿಲ್ಲೆಯಲ್ಲೂ ತಮ್ಮ ಬೆಂಬಲಿಗರ ಆಪ್ತ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಅದರಲ್ಲೂ ಪಕ್ಷದ ಯುವ ಪಡೆ ಡಿಕೆಶಿ ಪರ ಮೋಹ ಬೆಳೆಸಿಕೊಂಡಿದ್ದು ಕೂಡಾ ಅತಿ ಹೆಚ್ಚಾಗಿ ಯುವಕರ ಮೇಲೆ ಏಕಾಗ್ರತೆ ಸಾಧಿಸಿದ್ದ ಡಿಕೆಶಿಯವರ ಚಾಣಾಕ್ಷತೆ ಎಂದರೆ ತಪ್ಪೇನಲ್ಲ.ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ತಕ್ಷಣವೇ ಪಕ್ಷದ ಕಛೇರಿಯಲ್ಲಿ ಸರಣಿ ಸಭೆ ನಡೆಸಿ ಸಂಘಟನೆಗೆ ಚುರುಕು ಮೂಡಿಸಬೇಕೆನ್ನವಷ್ಟರಲ್ಲಿ ಮನುಕುಲಕ್ಕೆ ಮಹಾಮಾರಿಯಾದ ಕರೋನಾ ಸೋಂಕು ರಾಜ್ಯದೆಲ್ಲೆಡೆ ಹರಡಿ ಲಾಕ್‍ಡೌನ್ ಜಾರಿಯಾಗಿ ಪಕ್ಷದ ಸಂಘಟನೆಗೆ ಅಡಚಣೆಯಾಯಿತು.ತಕ್ಷಣವೇ ಚುರುಕಾದ ಡಿ ಕೆ ಶಿವಕುಮಾರ್ ಕೋರೋನಾ ವೈರಸ್ ನಿಂದ ಸಂಕಷ್ಟದಲ್ಲಿರುವ ಜನತೆಗೆ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಹೇಗೆ ಸ್ಪಂದಿಸಬಹುದು ಎನ್ನುವ ನಿಟ್ಟಿನಲ್ಲಿ ಯೋಚಿಸಿ ಕೋವಿಡ್ 19 ಕಾರ್ಯಪಡೆಯನ್ನು ಮಾಜಿ ಸಚಿವರಾದ ರಮೇಶ್ ಕುಮಾರ್ ಮತ್ತು ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಹಿರಿಯರ ಸಮಿತಿ ರಚಿಸಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಹೇಗೆ ಸಹಾಯ ಮಾಡಬಹುದು ಎಂದು ಸಲಹೆ ಪಡೆದರು. ಸರ್ಕಾರದ ಆದೇಶಗಳನ್ನು ಎಲ್ಲರೂ ಪಾಲನೆ ಮಾಡಲು ಸೂಚಿಸುತ್ತಾ ಸರ್ಕಾರದ ನಿರ್ದಾರಗಳಿಗೆ ಬೆಂಬಲಿಸಿ ಕೋರೋನಾ ವೈರಸ್ ನಿವಾರಣೆಗೆ ಟೊಂಕಕಟ್ಟಿ ನಿಂತರುಹಿರಿಯ ನಾಯಕರ ಸಲಹೆ ಪಡೆದು ಕಾಂಗ್ರೆಸ್ ಪಕ್ಷದ ವತಿಯಿಂದ ಕೋವಿಡ್ 19 ಪರಿಹಾರ ನಿಧಿ ಸ್ಥಾಪಿಸಿ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಸ್ಥಳೀಯ ಸಂಸ್ಥೆ ಜನ ಪ್ರತಿನಿಧಿಗಳು,ಹಾಗೂ ಪಕ್ಷದ ಪದಾಧಿಕಾರಿಗಳು ನಿಗದಿ ಮೊತ್ತ ದೇಣಿಗೆ ನೀಡಲು ತಕ್ಷಣವೇ ಸುತ್ತೋಲೆ ಹೊರಡಿಸಿ ಪರಿಹಾರ ಸಂಗ್ರಹಕ್ಕೆ ಆದ್ಯತೆ ನೀಡಿದರುಇಡೀ ರಾಜ್ಯದಾದ್ಯಂತ ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ ಜನರ ನೆರವಿಗೆ ನಿಲ್ಲಲು ಪ್ರತಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ “ಕೋವಿಡ್ 19 ಟಾಸ್ಕಫೋರ್ಸ ಸಮಿತಿ’ ರಚಿಸಿ ರಾಜ್ಯದೆಲ್ಲೆಡೆಯಿಂದ ವಾಸ್ತವ ವರದಿ ತರಿಸಿಕೊಂಡು ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದರು.ಡಿಕೆಶಿಯವರ ಸಲಹೆಯಂತೆ ಇಡೀ ರಾಜ್ಯದಾದ್ಯಂತ ಬಡಜನರಿಗೆ ದಿನಸಿ, ಮಾಸ್ಕ್’ ಸ್ಯಾನಿಟೈಸರ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾಂಗ್ರೆಸ್ ನ ನಾಯಕರು ಕಾರ್ಯಕರ್ತರು ಟಾಸ್ಕಫೋರ್ಸ ಮುಖಾಂತರ ನೀಡಿ ಸಂಕಷ್ಟಕ್ಕೀಡಾದ ಜನತೆಯ ಜೊತೆ ಕೈ ಜೋಡಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರಾದ ರಿಜ್ವಾನ್ ಅರ್ಷದ್, ಜಮೀರ್ ಅºಮದ್ ಖಾನ್  ನಿತ್ಯವೂ ಆಹಾರದ ಪೊಟ್ಟಣ ವಿತರಣೆ, ಉಚಿತ ಮಾತ್ರೆ ವಿತರಣೆ ಮಾಡಿ ಕಾಂಗ್ರೆಸ್ ಬದ್ಧತೆ ಪ್ರದರ್ಶಿಸಿದರು.ಇನ್ನೂ ಕೆಲವು ಕಡೆ ರೈತರ ಬೆಳೆಗೆ ಮಾರುಕಟ್ಟ ಇಲ್ಲದೇ ರೈತರ ಸಂಕಷ್ಟ ಕಂಡು ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಶಾಸಕರಾದ ಸಿರಾಜ್ ಷೇಖ್ ಹೊಲದಲ್ಲಿಯೇ ಫಸಲು ಖರೀದಿಸಿ ಬಡವರಿಗೆ ಹಂಚಿ ನೆರವಾದರು. ಇನ್ನೂ ಕೆಲ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಬಳ್ಳಾರಿ ಗ್ರಾಮಾಂತರದ ನಾಗೇಂದ್ರ ಪ್ರತಿ ಹಳ್ಳಿ ತಿರುಗಿ ಬಡಜನರಿಗೆ ನೆರವಾಗುವ ಜೊತೆಗೆ ಕೋರೋನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಶುಚಿತ್ವ ಕಾಪಾಡಲು ಜನತೆಗೆ ಮನವಿ ಮಾಡಿದರು.ಆಡಳಿತದಲ್ಲಿ ಇರುವ ಬಿಜೆಪಿಗಿಂತ ಕಾಂಗ್ರೆಸ್ ಸಂಕಷ್ಟಕ್ಕೀಡಾದ ಜನತೆಯ ನೆರವಿಗೆ ಮುಂದೆ ಬಂದಿದ್ದು ಎಲ್ಲರಿಗೂ ಢಾಳಾಗಿ ಗೋಚರಿಸುವ ಸಂಗತಿ. ಕೆಪಿಸಿಸಿ ಅಧ್ಯಕ್ಷ ಗಾದಿಗೇರಿದ ಕೂಡಲೇ ಕರ್ನಾಟಕದ ಜನತೆಗೆ ಈ ಮೂಲಕ ಒಂದು ಸಂದೇಶವನ್ನಂತೂ ನೀಡಿದಂತಾಯಿತು. ಅಧಿಕಾರವಿರಲಿ ಬಿಡಲಿ ನಿಮ್ಮ ನೆರವಿಗೆ ನಮ್ಮ ಕಾಂಗ್ರೆಸ್ ಬಳಗ ಹೆಗಲುಗೊಡಲಿದೆ ಎಂದು.ಪಕ್ಷದ ಚುಕ್ಕಾಣಿ ಹಿಡಿದು ಸರ್ಕಾರದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಳಸಿಕೊಂಡು ಜನರಿಗೆ ನೆರವಾದ ಡಿಕೆಶಿ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವ ಕಾಂಗ್ರೆಸ್ಸಿಗರ ನುಡಿ ನೂರಕ್ಕೆ ನೂರರಷ್ಟು ಸತ್ಯ.ಕಫ್ರ್ಯೂ ಮತ್ತು ಲಾಕ್ ಡೌನ್ ಸಮಸ್ಯೆಯಿಂದ ಸಭೆ ನಡೆಸಿ ಸಲಹೆ ಸೂಚನೆ ನೀಡಲಾಗದೆ ಹೊಸದಾಗಿ “ಜೂಮ್ ಆಪ್’ ಮೂಲಕ ಜಿಲ್ಲ ಕಾಂಗ್ರೆಸ್ ಮತ್ತು ಟಾಸ್ಕಫೋರ್ಸ, ಸಾಮಾಜಿಕ ಜಾ¯ತಾಣ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಸೇವಾದಳದ ಪದಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಶ ಮೂಲಕ ಪ್ರತಿದಿನ ಸಭೆ ನಡೆಸಿ ಪಕ್ಷ ಮತ್ತು ಕಾರ್ಯಕರ್ತರು ಮಾಡಬೇಕಾದ ಕೆಲಸಗಳನ್ನು ತಿಳಿಸಿ ಜನರ ಸಂಕಷ್ಟಕ್ಕೆ ನೆರವಾಗಲು ತಿಳಿಸಿದರು.

ಪತ್ರೇಶ್ ಹಿರೇಮಠ್
ಮಾಧ್ಯಮ ವಕ್ತಾರರು,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು
ವಿಳಾಸ
ಪತ್ರೇಶ್ ಹಿರೇಮಠ್ಕೊಹಿಮ’’ ಬಸರಕೋಡು-583224ಹಗರಿಬೊಮ್ಮನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ9844338881e-mಚಿiಟ:- pathreshhm@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ